top of page

'ವಿಪರೀತ ಕುಡಿತ, 14 ಬಾರಿ Rehab ಗೆ ದಾಖಲು': ಸಚಿನ್ ತೆಂಡೂಲ್ಕರ್ ಗೆಳೆಯ Vinod Kambli ಆರೋಗ್ಯ ಸಮಸ್ಯೆ ಬಹಿರಂಗ ಮಾಡಿದ ಆಪ್ತ ಸ್ನೇಹಿತ

  • Writer: sumanth newwaves
    sumanth newwaves
  • Dec 5, 2024
  • 2 min read

Updated: Sep 19

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿನ್ ತೆಂಡೂಲ್ಕರ್ ವೇದಿಕೆ ಮೇಲಿದ್ದ ತಮ್ಮ ಗೆಳೆಯ ವಿನೋದ್ ಕಾಂಬ್ಳಿ ಬಳಿ ಹೋಗಿ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಸಚಿನ್ ರನ್ನು ಗುರುತಿಸಿದ ವಿನೋದ್ ಕಾಂಬ್ಳಿ ಸಚಿನ್ ರ ಕೈಯನ್ನು ಗಟ್ಟಿಯಾಗಿ ಹಿಡಿದು ಭಾವುಕರಾದರು.

ree









ಮುಂಬೈ: ಲೆಜೆಂಡರಿ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಸಚಿನ್ ತೆಂಡೂಲ್ಕರ್ ಆಪ್ತ ವಿನೋದ್ ಕಾಂಬ್ಳಿ ಆರೋಗ್ಯದ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಿದ್ದು, ಅವರ ಹೀನಾಯ ಪರಿಸ್ಥಿತಿ ಕುರಿತು ಅವರ ಆಪ್ತ ಗೆಳೆಯ ಮಾಹಿತಿ ನೀಡಿದ್ದಾರೆ.

ಹೌದು.. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿನ್ ತೆಂಡೂಲ್ಕರ್ ವೇದಿಕೆ ಮೇಲಿದ್ದ ತಮ್ಮ ಗೆಳೆಯ ವಿನೋದ್ ಕಾಂಬ್ಳಿ ಬಳಿ ಹೋಗಿ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಸಚಿನ್ ರನ್ನು ಗುರುತಿಸಿದ ವಿನೋದ್ ಕಾಂಬ್ಳಿ ಸಚಿನ್ ರ ಕೈಯನ್ನು ಗಟ್ಟಿಯಾಗಿ ಹಿಡಿದು ಭಾವುಕರಾದರು.

ಅಪರೂಪಕ್ಕೆ ಈ ಇಬ್ಬರು ಸ್ನೇಹಿತರು (ತೆಂಡೂಲ್ಕರ್, ಕಾಂಬ್ಳಿ) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಗುರುತಿಸಲು ಕಷ್ಟವಾಗುವಷ್ಟರ ಮಟ್ಟಿಗೆ ಕಾಂಬ್ಳಿ ಅನಾರೋಗ್ಯ ಪೀಡಿತರಾಗಿದ್ದರು.


ಇಷ್ಟಕ್ಕೂ ವಿನೋದ್ ಕಾಂಬ್ಳಿಗೇನಾಗಿದೆ? ಅವರ ಆರೋಗ್ಯ ಯಾಕಿಷ್ಟು ಹದಗಟ್ಟಿದೆ?

ವಿನೋದ್ ಕಾಂಬ್ಳಿ ತಮ್ಮ ಜೀವನದಲ್ಲಿ ವಿಪರೀತ ಕುಡಿತದ ಚಟವನ್ನು ಬೆಳೆಸಿಕೊಂಡಿದ್ದದ್ದು, ಅವರ ಕ್ರೀಡಾ ಜಗತ್ತಿಗೆ ಭಾರೀ ಹಿನ್ನಡೆಗೆ ಕಾರಣವಾಯಿತು. ಕಾಂಬ್ಲಿ ದಿನದ ಬಹುತೇಕ ಸಮಯವನ್ನು ಬಾರ್ ನಲ್ಲಿ ಕಳೆಯುತ್ತಿದ್ದರು. ಕುಡಿತದ ಚಟ, ಸಣ್ಣಸಣ್ಣ ಅಪರಾಧಗಳನ್ನೂ ಅವರಿಂದ ಮಾಡಿಸಿತು. ತಮ್ಮ ಜೀವನದಲ್ಲಿ ಸುಧಾರಣೆ ತರುವ ಕಡೆ ಗಮನ ಕೊಡದ ವಿನೋದ್ ಕಾಂಬ್ಳಿ, ತನ್ನ ಕಷ್ಟದ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಕೈಹಿಡಿಯಲಿಲ್ಲ ಎಂದು ಬಹಿರಂಗವಾಗಿಯೇ ದೂರಿದರು. ಇವರು ತಮ್ಮ ಪತ್ನಿಯ ಜೊತೆಗೆ, ಬಾಲಿವುಡ್ ಗಾಯಕರೊಬ್ಬರು ಹೊಡೆದರು ಎನ್ನುವ ಕಾರಣಕ್ಕಾಗಿ ಪೊಲೀಸ್ ಠಾಣೆ ಮೆಟ್ಟಲೇರುವಂತಾಗಿತ್ತು. ಪತ್ನಿ ಮೇಲೂ ಹಲ್ಲೆ ಮಾಡಿದ್ದ ಕಾಂಬ್ಳಿ ಪೊಲೀಸ್ ಠಾಣೆಗೂ ಹೋಗಿದ್ದರು.

ಆರೋಗ್ಯ ಸಮಸ್ಯೆ ಬಹಿರಂಗ ಮಾಡಿದ ಆಪ್ತ ಸ್ನೇಹಿತ

ಇದೆಲ್ಲದರ ನಡುವೆ ವಿನೋದ್ ಕಾಂಬ್ಳಿ ಆರೋಗ್ಯ ತೀರಾ ಹದಗೆಟ್ಟಿತ್ತು. ಇದು ಎಷ್ಟರಮಟ್ಟಿಗೆ ಎಂದರೆ ಒಂದು ಕಾಲದ ಸ್ಟಾರ್ ಕ್ರಿಕೆಟರ್ ಎದ್ದು ನಿಲ್ಲಲೂ ಕೂಡ ಆಗದ ಸ್ಥಿತಿಯಲ್ಲಿದ್ದ ವಿಡಿಯೋವೊಂದು ವ್ಯಾಪಕ ವೈರಲ್ ಆಗಿತ್ತು. ಇದೀಗ ಕಾಂಬ್ಳಿ ಅವರ ಆಪ್ತ ಸ್ನೇಹಿತರೊಬ್ಬರು ಅವರ ಆರೋಗ್ಯ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದಾರೆ. ಕಾಂಬ್ಳಿಗೆ ತೀವ್ರವಾದ, ಬಹು ಆರೋಗ್ಯ ಸಮಸ್ಯೆಗಳಿದ್ದು, ಅವರ ಕುಡಿತದ ಚಟ ಬಿಡಿಸಲು ಅವರನ್ನು ಬರೊಬ್ಬರಿ 14 ಬಾರಿ ಪುನರ್ವಸತಿ ಕೇಂದ್ರ (rehab)ಕ್ಕೆ ದಾಖಲಿಸಲಾಗಿತ್ತು ಎಂದು ಕಾಂಬ್ಳಿ ಆಪ್ತ ಹಾಗೂ ಮಾಜಿ ಪ್ರಥಮ ದರ್ಜೆ ಕ್ರಿಕೆಟ್ ಅಂಪೈರ್ ಮಾರ್ಕಸ್ ಕೌಟೊ ಹೇಳಿದ್ದಾರೆ.

ಕಾಂಬ್ಳಿ ಪುನರ್ವಸತಿ ಕೇಂದ್ರಕ್ಕೆ ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ.. ಕಾಂಬ್ಳಿ ಈಗಾಗಲೇ 14 ಬಾರಿ ಪುನರ್ವಸತಿಗೆ ಹೋಗಿದ್ದಾರೆ. ಮೂರು ಬಾರಿ ನಾವು ಅವನನ್ನು ವಸೈನಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದಿದ್ದೇವೆ ಎಂದು ಕೌಟೋ ಹೇಳಿದ್ದಾರೆ. ಕೋಟೊ ಅವರು ಆಗಸ್ಟ್‌ನಲ್ಲಿ ಬಾಂದ್ರಾದಲ್ಲಿನ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕಾಂಬ್ಳಿ ನಡೆದಾಡಲೂ ಕೂಡ ಕಷ್ಟ ಪಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆಗ ಕಾಂಬ್ಳಿಗೆ ಭಾರತೀಯ ಕ್ರಿಕೆಟ್ ತಂಡದ ದಂತಕಥೆ ಕಪಿಲ್ ದೇವ್ ನೆರವು ನೀಡಿದ್ದರು. ಆಗ ಕಪಿಲ್ ಹೇಳಿದ್ದೇನು ಎಂದರೆ 'ಕಾಂಬ್ಳಿ ಚೇತರಿಕೆಯತ್ತ ಮೊದಲ ಹೆಜ್ಜೆ ಇಡಲು ಸಿದ್ಧರಿರಬೇಕು' ಎಂದು ಸ್ಪಷ್ಟಪಡಿಸಿದ್ದರು.

"ಕಾಂಬ್ಳಿ ಅವರು ಪುನಶ್ಚೇತನ ಕೇಂದ್ರಕ್ಕೆ ಹೋಗಲು ಬಯಸಿದರೆ, ನಾವು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ಕಪಿಲ್ ದೇವ್ ನನಗೆ ಸ್ಪಷ್ಟವಾಗಿ ಹೇಳಿದ್ದರು. ಅಲ್ಲದೆ ಅವನು ಮೊದಲು ಪುನರ್ವಸತಿ ಕೇಂದ್ರಕ್ಕೆ ಹೋಗಬೇಕು. ಅವನು ಹಾಗೆ ಮಾಡಿದರೆ ಮಾತ್ರ, ಚಿಕಿತ್ಸೆಯು ಎಷ್ಟು ಸಮಯದವರೆಗೆ ಇರುತ್ತದೆ ಎಂಬುದನ್ನೂ ಲೆಕ್ಕಿಸದೆ ನಾವು ಬಿಲ್ ಪಾವತಿಸಲು ಸಿದ್ಧರಿದ್ದೇವೆ ಎಂದು ಭಾರತದ ಮಾಜಿ ವೇಗದ ಬೌಲರ್ ಬಲ್ವಿಂದರ್ ಸಿಂಗ್ ಸಂಧು ಹೇಳಿದ್ದಾರೆ.

Comments


ಹೆಚ್ಚು ಓದಿದ ಸುದ್ದಿ

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ಚುರುಮುರಿ: ಸಂಬಳದ ಜೋಕು!

ಕ್ರೀಡೆ

IPL 2025 ಕಳಪೆ ಸಾಧನೆ: ತವರಿನ ಅಂಗಳ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಗೆ 45ನೇ ಸೋಲು!

 

ಸಿನಿಮಾ ರಂಗಕ್ಕೆ ಕಾಲಿಟ್ಟ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ!

 

IPL 2025:ಪಾಟೀದಾರ್ ನಾಯಕತ್ವದ ಬಗ್ಗೆ ಮೈದಾನದಲ್ಲೇ ಅಸಮಾಧಾನ ತೋಡಿಕೊಂಡ ಕೊಹ್ಲಿ?

 

IPL 2025 | RCB vs DC: ಇದು ನನ್ನ ನೆಲ ಎಂದ ರಾಹುಲ್‌

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

 

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

 

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

 

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ದ್ರಾವಿಡ್ ಕುರಿತಂತೆ ಭಾವನಾತ್ಮಕ ಸಂದೇಶ ಹಂಚಿಕೊಂಡ ರೋಹಿತ್ ಶರ್ಮಾ

  • White Facebook Icon
bottom of page