top of page

ಸಾಮಾನ್ಯ ಶೀತ ಗುಣಪಡಿಸಲು ಸ್ಟೀಮ್ ತೆಗೆದುಕೊಂಡರೆ ಸಾಕೇ? ಇಲ್ಲಿವೆ ಗಿಡಮೂಲಿಕೆಗಳ ಕುರಿತಾದ ಸಲಹೆಗಳು

  • Writer: sumanth newwaves
    sumanth newwaves
  • Dec 5, 2024
  • 1 min read

ಸಾಮಾನ್ಯ ಶೀತ, ದಟ್ಟಣೆ, ಗಂಟಲು ನೋವು, ಅಸ್ತಮಾ, ಅಲರ್ಜಿಗಳು ಮತ್ತು ಉಸಿರಾಟದ ತೊಂದರೆಗಳಿಗೆ ಸ್ಟೀಮ್ ತೆಗೆದುಕೊಳ್ಳುವುದು ಸಾಂಪ್ರದಾಯಿಕ ಚಿಕಿತ್ಸೆಯಾಗಿದೆ. ನಿರ್ದಿಷ್ಟ ಆಯುರ್ವೇದ ಗಿಡಮೂಲಿಕೆಗಳನ್ನು ನೀರಿಗೆ ಸೇರಿಸಿ ಸ್ಟೀಮ್ ತೆಗೆದುಕೊಳ್ಳುವುದರಿಂದ ಆದಷ್ಟು ಬೇಗ ಚೇತರಿಕೆ ಕಾಣಬಹುದು.

ree








ಸಾಮಾನ್ಯ ಶೀತ, ದಟ್ಟಣೆ, ಗಂಟಲು ನೋವು, ಅಸ್ತಮಾ, ಅಲರ್ಜಿಗಳು ಮತ್ತು ಉಸಿರಾಟದ ತೊಂದರೆಗಳಿಗೆ ಸ್ಟೀಮ್ ತೆಗೆದುಕೊಳ್ಳುವುದು ಸಾಂಪ್ರದಾಯಿಕ ಚಿಕಿತ್ಸೆಯಾಗಿದೆ. ನಿರ್ದಿಷ್ಟ ಆಯುರ್ವೇದ ಗಿಡಮೂಲಿಕೆಗಳನ್ನು ನೀರಿಗೆ ಸೇರಿಸಿ ಸ್ಟೀಮ್ ತೆಗೆದುಕೊಳ್ಳುವುದರಿಂದ ಆದಷ್ಟು ಬೇಗ ಚೇತರಿಕೆ ಕಾಣಬಹುದು.

ಆಯುರ್ವೇದದಲ್ಲಿ ನೋವು ಮತ್ತು ಅಸ್ವಸ್ಥತೆಯನ್ನು ನಿರ್ವಹಿಸಲು ದೇಹಕ್ಕೆ ಬಿಸಿಯಾದ ತೇವದ ಪದಾರ್ಥಗಳನ್ನು ಅನ್ವಯಿಸುವ 'ಫೊಮೆಂಟೇಶನ್' ಅಡಿಯಲ್ಲಿ ವರ್ಗೀಕರಿಸಲಾಗಿದೆ. ಸ್ಟೀಮ್ ತೆಗೆದುಕೊಳ್ಳುವುದು ಮೂಗು ಮತ್ತು ಗಂಟಲಿನ ಶುದ್ಧೀಕರಣಕ್ಕೆ ಒಂದು ಉತ್ತಮ ವಿಧಾನವಾಗಿದೆ. 

ಏಕೆಂದರೆ, ಇದು ಒಣಗಿರುವ ಶ್ವಾಸ ನಾಳ ಮತ್ತು ಕಫ ಶೇಖರಣೆಯನ್ನು ತೇವಗೊಳಿಸುವ ಮೂಲಕ ಭಾರ, ಉಸಿರುಗಟ್ಟುವಿಕೆ, ಉಬ್ಬಸ ಮತ್ತು ಕೆಲವು ಉಸಿರಾಟದ ಸೋಂಕುಗಳನ್ನು ನಿವಾರಿಸುತ್ತದೆ ಎಂದು ನೋಯ್ಡಾ ಮೂಲದ ಆಯುರ್ವೇದ ವೈದ್ಯರಾದ ಗೀತಾ ಕೃಷ್ಣನ್ ಹೇಳುತ್ತಾರೆ. 


ಸ್ಟೀಮ್ ತೆಗೆದುಕೊಳ್ಳುವಾಗ ನೀರಿನಲ್ಲಿ ಮಿಶ್ರಣ ಮಾಡಬಹುದಾದ ಕೆಲವು ಅತ್ಯುತ್ತಮ ಗಿಡಮೂಲಿಕೆಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ. ಅವುಗಳೆಂದರೆ...

ಪುದೀನ

ತಂಪಾಗಿಸುವ ಸಂವೇದನೆಯ ಜೊತೆಗೆ, ಪುದೀನ ಸ್ಟೀಮ್ ತೆಗೆದುಕೊಳ್ಳುವುದು ಕಟ್ಟಿರುವ ಕಫವನ್ನು ಸಡಿಲಗೊಳಿಸುತ್ತದೆ. ಮೆಂಥಾಲ್ ಎಂಬ ನೈಸರ್ಗಿಕವಾಗಿ ಸಂಭವಿಸುವ ರಾಸಾಯನಿಕದ ಉಪಸ್ಥಿತಿಯೇ ಇದಕ್ಕೆ ಕಾರಣ. ಇದು ಕಫವನ್ನು ನಿವಾರಿಸುತ್ತದೆ ಮತ್ತು ಮೂಗಿನಿಂದ ಉಸಿರಾಟವನ್ನು ಸರಾಗಗೊಳಿಸುತ್ತದೆ.

ತುಳಸಿ

ತುಳಸಿಯಲ್ಲಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ಕಫವನ್ನು ತ್ವರಿತವಾಗಿ ತೆರವುಗೊಳಿಸುತ್ತದೆ ಮತ್ತು ನೈಸರ್ಗಿಕ ವಸ್ತುವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ದೇಹವು ಒತ್ತಡಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ.

ರೋಸ್ಮರಿ

ರೋಸ್ಮರಿಯಲ್ಲಿರುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಕೊಲ್ಲುತ್ತದೆ. ಶೀತ ಮತ್ತು ಜ್ವರದಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಶ್ವಾಸನಾಳದ ಅಸ್ತಮಾದ ಚಿಕಿತ್ಸೆಯಲ್ಲಿ ಆಂಟಿಸ್ಪಾಸ್ಮೊಡಿಕ್ ಆಗಿಯೂ ಕಾರ್ಯನಿರ್ವಹಿಸುತ್ತದೆ.

Comments


ಹೆಚ್ಚು ಓದಿದ ಸುದ್ದಿ

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ಚುರುಮುರಿ: ಸಂಬಳದ ಜೋಕು!

ಕ್ರೀಡೆ

IPL 2025 ಕಳಪೆ ಸಾಧನೆ: ತವರಿನ ಅಂಗಳ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಗೆ 45ನೇ ಸೋಲು!

 

ಸಿನಿಮಾ ರಂಗಕ್ಕೆ ಕಾಲಿಟ್ಟ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ!

 

IPL 2025:ಪಾಟೀದಾರ್ ನಾಯಕತ್ವದ ಬಗ್ಗೆ ಮೈದಾನದಲ್ಲೇ ಅಸಮಾಧಾನ ತೋಡಿಕೊಂಡ ಕೊಹ್ಲಿ?

 

IPL 2025 | RCB vs DC: ಇದು ನನ್ನ ನೆಲ ಎಂದ ರಾಹುಲ್‌

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

 

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

 

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

 

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ದ್ರಾವಿಡ್ ಕುರಿತಂತೆ ಭಾವನಾತ್ಮಕ ಸಂದೇಶ ಹಂಚಿಕೊಂಡ ರೋಹಿತ್ ಶರ್ಮಾ

  • White Facebook Icon
bottom of page