top of page

ಅಮೆರಿಕದ 'ರೈಟಿಸ್ಟ್' ಅದೇಕೆ ಭಾರತೀಯರ ಮಿತ್ರನಾಗಲಾರ? (ತೆರೆದ ಕಿಟಕಿ)

  • Writer: sumanth newwaves
    sumanth newwaves
  • Sep 18
  • 1 min read

ಡೆಮಾಕ್ರಟ್ ಪಾಳೆಯಕ್ಕೆ ಹೋಲಿಸಿದರೆ ಇಸ್ಲಾಂ ಮೂಲಭೂತವಾದವನ್ನು ಎದರಿಸುವುದಕ್ಕೆ ರಿಪಬ್ಲಿಕನ್ನರು ಸ್ವಲ್ಪ ಹೆಚ್ಚು ಸಶಕ್ತರು ಎಂದು ವಾದಿಸುವುದಕ್ಕೆ ಸ್ವಲ್ಪ ಜಾಗವಿರಬಹುದೇ ಹೊರತು ಉಳಿದಂತೆ ಅಮೆರಿಕವು ರೈಟಿಸ್ಟ್ ಆದಷ್ಟೂ ಭಾರತಕ್ಕೆ ತಲೆನೋವೇ ಹೆಚ್ಚು.

!
!

ಭಾರತದಲ್ಲಿರುವ ರಾಜಕೀಯ ಬಲಪಂಥದ ಬೆಂಬಲಿಗರು ಅಮೆರಿಕದಲ್ಲಿ ರೈಟಿಸ್ಟ್ ಎಂದು ಕರೆಸಿಕೊಳ್ಳುವವರನ್ನು ತಮ್ಮ ಸೈದ್ಧಾಂತಿಕ ಸಹಪ್ರಯಾಣಿಕರೆಂದುಕೊಳ್ಳುವುದು ಸಾಮಾನ್ಯವಾಗಿತ್ತು. ಅದು ಹಾಗಲ್ಲ ಎಂಬುದು ಈಗ ಪ್ರಾಯೋಗಿಕವಾಗಿ ಸಾಬೀತಾಗುತ್ತಿದೆ. ಇದಂತೂ ತಥಾಕಥಿತ ಬಲಪಂಥೀಯ ರಾಜಕೀಯ ಪಕ್ಷವಾದ ರಿಪಬ್ಲಿಕನ್ನರ ಈ ಬಾರಿಯ ಆಡಳಿತದಲ್ಲಿ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಹಾಗಾದರೆ, ಈ ರೈಟಿಸ್ಟ್ ಎಂಬ ರಾಜಕೀಯ ಪದ ನಮ್ಮಲ್ಲಿ ಬಹುತೇಕರನ್ನು ಹಾದಿ ತಪ್ಪಿಸಿರುವುದಾದರೂ ಎಲ್ಲಿ?

ಅಮೆರಿಕದ ‘ರೈಟ್’ ನಮಗೆ ಬಲಗೊಡುವುದಿಲ್ಲ

ಅದು ಭಾರತೀಯ ಮೂಲದ ಅಮೆರಿಕನ್ನರೇ ಇದ್ದಿರಬಹುದು, ಅಥವಾ ಇಲ್ಲಿಂದ ಭಾವನಾತ್ಮಕವಾಗಿ ಅಮೆರಿಕದ ವಿದ್ಯಮಾನಗಳಿಗೆ ಸ್ಪಂದಿಸುವ ಭಾರತೀಯರೇ ಆಗಿದ್ದಿರಬಹುದು, ಇವರೆಲ್ಲ ಒಂದು ಸಮತೋಲನದ ಕಾರ್ಯತಂತ್ರದ ದೃಷ್ಟಿಯಿಂದ ತಮ್ಮ ರಾಜಕೀಯ ಬೆಂಬಲವನ್ನು ಅಭಿವ್ಯಕ್ತಿಸುತ್ತಿದ್ದರೆ ಅದಕ್ಕೇನೂ ಅಡ್ಡಿ ಇಲ್ಲ. ಅಂದರೆ, ಅಮೆರಿಕದಲ್ಲಿರುವ ಡೆಮಾಕ್ರಾಟ್ ಪಕ್ಷವು ತಮ್ಮನ್ನು ಟೇಕನ್ ಫಾರ್ ಗ್ರಾಂಟೆಡ್-ಹೇಗೆಂದರೂ ಇವರು ನಮ್ಮ ಜತೆ ಎಂದುಕೊಳ್ಳುವುದು ಬೇಡ ಎನ್ನುವ ಕಾರ್ಯತಂತ್ರದ ದೃಷ್ಟಿಯಿಂದ ರಿಪಬ್ಲಿಕನ್ನರನ್ನು ಬೆಂಬಲಿಸಿದರೆ ಅದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಹೆಚ್ಚಿನ ಮಂದಿ ರಿಪಬ್ಲಿಕನ್ನರನ್ನು ‘ರೈಟಿಸ್ಟ್’ ಎಂಬ ಕಾರಣಕ್ಕೆ ಬೆಂಬಲಿಸುತ್ತಾರೆ. ಅದುವೇ ಮಿಥ್ಯೆ!

ಡೆಮಾಕ್ರಟ್ ಪಾಳೆಯಕ್ಕೆ ಹೋಲಿಸಿದರೆ ಇಸ್ಲಾಂ ಮೂಲಭೂತವಾದವನ್ನು ಎದರಿಸುವುದಕ್ಕೆ ರಿಪಬ್ಲಿಕನ್ನರು ಸ್ವಲ್ಪ ಹೆಚ್ಚು ಸಶಕ್ತರು ಎಂದು ವಾದಿಸುವುದಕ್ಕೆ ಸ್ವಲ್ಪ ಜಾಗವಿರಬಹುದೇ ಹೊರತು ಉಳಿದಂತೆ ಅಮೆರಿಕವು ರೈಟಿಸ್ಟ್ ಆದಷ್ಟೂ ಭಾರತಕ್ಕೆ ತಲೆನೋವೇ ಹೆಚ್ಚು. ಏಕೆಂದರೆ ಅಮೆರಿಕದ ರಾಜಕೀಯ ಚೌಕಟ್ಟಿನಲ್ಲಿ ಬಲಪಂಥವು ಗಟ್ಟಿಯಾಗುವುದು ಎಂದರೆ ಅದರರ್ಥ ಅದರ ಕ್ರೈಸ್ತ ಐಡೆಂಟಿಟಿಯೇ ಮುಖ್ಯವಾಗುವುದು ಎಂದರ್ಥ. ರಿಪಬ್ಲಿಕನ್ನರು ಇವಾಂಜಲಿಕಲ್ ಕ್ರೈಸ್ತ ಧಾರೆಯನ್ನು ಬಲವಾಗಿ ಪ್ರತಿಪಾದಿಸುವವರು. ಇದರರ್ಥ ಅವರು ಕೆಲವು ಉದಾರ ಕ್ರೈಸ್ತ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುತ್ತಾರೆ ಎಂದಾಗಿದ್ದರೆ ಅದರಲ್ಲೇನೂ ತೊಂದರೆ ಇರಲಿಲ್ಲ. ಆದರೆ ಇವಾಂಜಲಿಕಲ್ ಎಂಬುದರ ವ್ಯಾಪ್ತಿ ಏನೆಂದರೆ, ಮೂಲತಃ ಅವರು ಕ್ರೈಸ್ತರಾದವರು ಮಾತ್ರ ತಮ್ಮವರೆಂದೂ, ಹಾಗೆ ಜಗತ್ತಿನ ಎಲ್ಲರನ್ನೂ ಕ್ರೈಸ್ತಮತಕ್ಕೆ ಮತಾಂತರಿಸುವುದೇ ದೈವದ ಇಚ್ಛೆಯಾಗಿದೆ ಎಂಬುದನ್ನೂ ಪ್ರತಿಪಾದಿಸುವವರು ಎಂದರ್ಥ. ಈ ಹಿನ್ನೆಲೆಯಲ್ಲಿ ಅಮೆರಿಕದ ಕಟ್ಟರ್ ರೈಟಿಸ್ಟ್ ಒಬ್ಬ ಯಾವುದೇ ಭಾರತೀಯನ ಸೈದ್ಧಾಂತಿಕ ಸಹಪಯಣಿಗನಾಗುವುದಕ್ಕೆ ಸಾಧ್ಯವಿಲ್ಲ. ಒಂದು ಪುಸ್ತಕ, ಒಂದು ಪ್ರವಾದಿಯ ಹೊರತಾಗಿ ಅಂತಿಮ ಸತ್ಯವನ್ನು ತಲುಪುವುದಕ್ಕೆ ಇನ್ಯಾವ ಮಾರ್ಗಗಳೂ ಇಲ್ಲ ಎಂದು ಪ್ರತಿಪಾದಿಸುವ ಯಾರೇ ಆದರೂ ಆ ಕ್ಷಣದ ವ್ಯಾವಹಾರಿಕ ಕಾರಣಗಳಿಗಾಗಿ ಸ್ನೇಹಿತರಾಗಿದ್ದಿರಬಹುದೇ ಹೊರತು ಅದರಾಚೆಗಿನ ಭಾವನಾತ್ಮಕತೆ ಬೇಕಿಲ್ಲ.

Comments


ಹೆಚ್ಚು ಓದಿದ ಸುದ್ದಿ

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ಚುರುಮುರಿ: ಸಂಬಳದ ಜೋಕು!

ಕ್ರೀಡೆ

IPL 2025 ಕಳಪೆ ಸಾಧನೆ: ತವರಿನ ಅಂಗಳ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಗೆ 45ನೇ ಸೋಲು!

 

ಸಿನಿಮಾ ರಂಗಕ್ಕೆ ಕಾಲಿಟ್ಟ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ!

 

IPL 2025:ಪಾಟೀದಾರ್ ನಾಯಕತ್ವದ ಬಗ್ಗೆ ಮೈದಾನದಲ್ಲೇ ಅಸಮಾಧಾನ ತೋಡಿಕೊಂಡ ಕೊಹ್ಲಿ?

 

IPL 2025 | RCB vs DC: ಇದು ನನ್ನ ನೆಲ ಎಂದ ರಾಹುಲ್‌

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

 

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

 

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

 

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ದ್ರಾವಿಡ್ ಕುರಿತಂತೆ ಭಾವನಾತ್ಮಕ ಸಂದೇಶ ಹಂಚಿಕೊಂಡ ರೋಹಿತ್ ಶರ್ಮಾ

  • White Facebook Icon
bottom of page